FLASH NEWS
Wednesday 12 September 2018
*ವಿಘ್ನ ನಿವಾರಕನ ಹಬ್ಬ , ಗಣೇಶ ಚತುರ್ಥಿ*
*"ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರುಮೇದೇವ ಸರ್ವ ಕಾರ್ಯೇಷು ಸರ್ವದ*"
ಭಾದ್ರಪದ ಮಾಸದ ನಾಲ್ಕನೇ ದಿನ ಚೌತಿ ಹಬ್ಬವು ಬರುತ್ತದೆ. ಎಲ್ಲ ದೇವರುಗಳಿಗಿಂತಲೂ ಅಗ್ರಸ್ಥಾನದಲ್ಲಿರುವ ಗಣೇಶನ ಪೂಜೆಯು ಸಾರ್ವಾತ್ರಿಕವಾಗಿ ನಡೆಯುತ್ತದೆ .ಗಣಪತಿಯ ಆರಾಧನೆಯು ಅನಾದಿ ಕಾಲದಿಂದಲೂ ನಡೆದು ಬಂದಿರುವ ಪದ್ಧತಿಯಾಗಿದೆ . ಗಣೇಶ ಚತುರ್ಥಿ ಹಬ್ಬವನ್ನು ಭಾರತದಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ .ಮಹಾರಾಷ್ತ್ರದಲ್ಲಿ ಈ ಹಬ್ಬಕ್ಕೆ ವಿಶೇಷ ಮಾನ್ಯತೆಯಿದೆ . ಯಾಕೆಂದರೆ ಮಹಾರಾಷ್ಟ್ರ ದ ಪುಣೆಯಲ್ಲಿ ಜನಿಸಿದ ಬಾಲಗಂಗಾಧರ ತಿಲಕರು ಬ್ರಿಟಿಷರ ಆಡಳಿತ ಕಾಲದಲ್ಲಿ ಜನರಲ್ಲಿ ಒಗ್ಗಟ್ಟು ಹಾಗು ಸೌಹಾರ್ದತೆಯನ್ನು ಬೆಳೆಸಲು ಗಣೇಶ ಚತುರ್ಥಿಯನ್ನು ಸಾರ್ವಜನಿಕ ಹಬ್ಬವಾಗಿ ಆಚರಿಸಲು ಮುಂದಾದರು .
ಭಾರತೀಯ ಜನಜೀವನದಲ್ಲಿ ಗಣಪತಿಯ ಸ್ಥಾನ ಅಗ್ರಗಣ್ಯವಾಗಿದೆ .ಗಣೇಶನು ವಿಘ್ನನಿವಾರಕನಾಗಿದ್ದಾನೆ . ಯಾವುದೇ ಉತ್ಸವ ಶುಭ ಕಾರ್ಯಗಳ ಆರಂಭದಲ್ಲಿ ಗಣೇಶನ ಪೂಜೆ , ಸ್ತುತಿ ನಡೆಯುತ್ತದೆ . ಇದರಿಂದ ಕಾರ್ಯಕ್ರಮವು ನಿರ್ವಿಘ್ನವಾಗಿ ನಡೆಯುತ್ತದೆ ಎಂಬ ನಂಬಿಕೆಯಿದೆ . ಇದಕ್ಕೆ ಕಾರಣ ಗಣೇಶನಿಗೆ ಶಿವ ಮತ್ತು ಇತರ ದೇವತೆಗಳ ಮೂಲಕ ಈ ವರವು ಲಭಿಸಿದುದಾಗಿದೆ
ವಿದ್ಯೆ ಹಾಗು ಬುದ್ದಿಯ ದೇವತೆ ಗಣಪತಿ. ಆದಕಾರಣ ಸಾಹಿತ್ಯ ಕ್ಷೇತ್ರದಲ್ಲಿಯೂ ಮೊದಲು ಗಣೇಶನ ಸ್ತುತಿಯನ್ನು ಮಾಡಲಾಗುತ್ತದೆ . ಅವನು ಸಕಲ ಶಾಸ್ತ್ರಗಳ ಜ್ಞಾನಿ ಎಂದು ತಿಳಿಯಲಾಗುತ್ತದೆ. .ಗಣಪತಿಯ ನಿತ್ಯ ಪೂಜೆಯಿಂದ ವಿದ್ಯಾದೇವತೆ ಸರಸ್ವತಿಯು ಸಂಪನ್ನಳಾಗುತ್ತಾಳೆ .ಗಣೇಶನು ಮೋದಕ ಪ್ರಿಯನಾಗಿದ್ದಾನೆ .ಅವನ ವಾಹನ ಇಲಿ . ಇಲಿ ಬಹಳ ಚಂಚಲವಾಗಿದೆ .ಚಂಚಲತೆ ಮನಸ್ಸಿನ ಪ್ರತೀಕವಾಗಿದೆ .ಗಣೇಶನ ಪೂಜೆಯಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ .
ಗಣೇಶ ಚತುರ್ಥಿಯ ದಿನ ಯಾರು ಚಂದ್ರನನ್ನು ನೋಡುವಂತಿಲ್ಲ .ನೋಡಿದರೆ ಕಳ್ಳತನದ ಅಪವಾದ ಬರುವುದೆಂಬ ನಂಬಿಕೆಯಿದೆ .ಈ ಕಾರಣದಿಂದ ಚೌತಿಯ ದಿನ ಚಂದ್ರನನ್ನು ನೋಡುವ ಸಾಹಸವನ್ನು ಯಾರು ಮಾಡುವುದಿಲ್ಲ .
ಗಣೇಶನಿಗೆ ಹಲವಾರು ಹೆಸರುಗಳಿವೆ .ಗಣೇಶ ,ವಿಘ್ನೇಶ ,ಗಣಪತಿ,ವಿನಾಯಕ ,ಲಂಬೋದರ , ಗಜಮುಖ , ವಕ್ರತುಂಡ , ಏಕದಂಥ , ಹೇರಂಭ , ಈಶಪುತ್ರ .... ಹೀಗೆ ಇನ್ನು ಹಲವಾರು .ಗಣಪತಿಯ ವ್ಯಕ್ತಿತ್ವದಲ್ಲಿ ಆನೆಯ ಗುಣ , ಬುದ್ಧಿ , ಬಲವಿದೆ , ಆದುದರಿಂದ ಗಣೇಶನ ಪೂಜೆಯು ಬುದ್ಧಿ ,ಬಲ ವನ್ನೊಳಗೊಂಡ ಸಂಪನ್ನ ಪೂಜೆಯಾಗಿದೆ .
ಎಷ್ಟು ಸಡಗರದಿಂದ ಗಣೇಶನನ್ನು ತಂದು ಪೂಜಿಸುತ್ತಾರೋ ಅಷ್ಟೇ ವೈಭವದಿಂದ ಗಣಪತಿ ವಿಸರ್ಜನೆಯ ಕಾರ್ಯಕ್ರಮಗಳು ಜರಗುತ್ತದೆ .ವಿಸರ್ಜನೆಯ ಸಂಧರ್ಭದಲ್ಲಿ ಈ ರೀತಿ ಪ್ರಾರ್ಥಿಸಲಾಗುತದೆ ಈ ವರ್ಷ ನಾವು ನಿಮ್ಮನು ದುಃಖದಿಂದ ವಿದಾಯ ಮಾಡುತ್ತೇವೆ .ಮತ್ತು ನಿಮ್ಮಲ್ಲಿ ಪ್ರಾರ್ಥನೆ ಏನೆಂದರೆ ಬರುವ ವರ್ಷ ನೀವು ಬೇಗನೆ ಬಂದು ಕೃಪೆ ಮಾಡಿರಿ .
ಗಣಪತಿ ಹಬ್ಬದಲ್ಲಿ ಬಡವ , ಬಲ್ಲಿದ , ಹಿರಿಯ , ಕಿರಿಯ , ಮೇಲು ಕೀಳು ಎಂಬ ಬೇಧಭಾವಗಳಿಲ್ಲದೆ ಎಲ್ಲ ವರ್ಗಗಳ ಜನರೂ ಭಾಗವಹಿಸುತ್ತಾರೆ. ಹೀಗೆ ನಮ್ಮ ದೇಶದಲ್ಲಿ . ಸಂಭ್ರಮ ಸಡಗರದಿಂದ ನಡೆಯುವ ಹಬ್ಬದಲ್ಲಿ ನಾವೆಲ್ಲರೂ ಭಾಗಿಗಳಾಗೋಣ ಹಾಗು ಗಣೇಶನ ಕೃಪೆಗೆ ಪಾತ್ರರಾಗೋಣ. ಸಮಸ್ತ ಜನರಿಗೂ
*ವಿಪ್ರಭ ನ್ಯೂಸ್ ವತಿಯಿಂದ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು.*
Subscribe to:
Posts (Atom)